ಮೈಸೂರು ಡ್ರೀಮ್ ಮರ್ಚೆಂಟ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ರೆಬಲ್ ಚಿತ್ರಕ್ಕೆ ಸಿಂಗಾಪುರದಲ್ಲಿ ಎರಡು ಹಾಡು ಹಾಗೂ ಕೆಲವು ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ಯಶಸ್ವಿಯಾಗಿ ಚಿತ್ರೀಕರಣ ಪೂರೈಸಿದ ಚಿತ್ರತಂಡ ಈಗ ನಗರಕ್ಕೆ ಹಿಂತಿರುಗಿದೆ.
ಸಾಮಾನ್ಯವಾಗಿ ಎಲ್ಲರು ಹಾಡಿನ ಚಿತ್ರೀಕರಣಕ್ಕಾಗಿ ಸಿಂಗಾಪುರಕ್ಕೆ ತೆರಳುತ್ತಾರೆ. ಆದರೆ ನಮ್ಮ ಚಿತ್ರಕ್ಕೆ ಸಿಂಗಾಪುರದಲ್ಲಿ ನಲವತ್ತಕ್ಕೂ ಹೆಚ್ಚು ದಿನ ಚಿತ್ರೀಕರಣ ನಡೆಸಲಾಯಿತು ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ಬಾಬು ತಿಳಿಸಿದ್ದಾರೆ. ಆದಿತ್ಯ, ಸಂಜನಾ, ದೀಪಿಕಾರಾವ್, ಶರತ್ಲೋಹಿತಾಶ್ವಾ, ರಾಮಕೃಷ್ಣ, ಅವಿನಾಶ್, ಸುಹಾಸಿನಿ ಮುಂತಾದವರು ಸಿಂಗಾಪುರದಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರಕ್ಕೆ ನವದೆಹಲಿ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ.
ನಿರ್ದೇಶಕರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸೆಲ್ವರಾಜ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೆಸಿಗಿಫ಼್ಟ್ ಸಂಗೀತ ನೀಡಿದ್ದಾರೆ. ರವಿವರ್ಮ ಹಾಗೂ ಡಿಫ಼ರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿರುವ ‘ರೆಬಲ್ಗೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಆದಿತ್ಯ, ಸಂಜನಾ, ದೀಪಿಕಾರವ್, ಶರತ್ಲೋಹಿತಾಶ್ವಾ, ರಾಮಕೃಷ್ಣ, ಅವಿನಾಶ್, ಸುಹಾಸಿನಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.